9/04/2008 01:31:00 ಅಪರಾಹ್ನ

ಹಿಂಗೆ ಒಂದಿಷ್ಟು Updates

ಬೆಂಗಳೂರಿನಿಂದ ಹರಿ ಹೇಳಿದ್ದು:


ಸಲಾಂ,

ಮತ್ತೆ ಗೌರಿ ಗಣೇಶ ಹಬ್ಬದ ವಾಸನೆಯು ಇಲ್ಲದೆ ನೀನು ಶರೀರವನ್ನು ಕಳೆದು ಕೊಂಡ ಆತ್ಮದಂತೆ ಆಗಿದ್ದೀಯ, ಇರಲಿ... ನಿನಗೆ ಒಂದು ಬಿಸಿ ಸುದ್ದಿ....

ಈ ಬಾರಿ ಬೆಂಗಳೂರಿನಲ್ಲಿ ಕೂಡ ಗಣಪತಿಯನ್ನು ಬೀದಿ ಬೀದೀಲಿ ಇಟ್ಟು traffic jam ಮಾಡಲು ಚಾನ್ಸ್ govt ಕೊಡಲಿಲ್ಲ....ಹಾಗಾಗಿ 20 ವರುಷದಿಂದ ಯಾರು ಸತತವಾಗಿ ಗಣಪನನ್ನು ಇಡುತ್ತಿದ್ದಾರೋ ಆ youth ಕ್ಲಬ್u ಗಳಿಗೆ ಮಾತ್ರ chance ಕೊಟ್ಟಿದ್ದಾರೆ... ಇದು BJP Govt. ಕೊಡುಗೆ...

ಮತ್ತೇ low lying areas ಎಲ್ಲ flood ಆಗಿ ಜನರು ಬೆಂಗಳೂರಿನಲ್ಲಿ boatನಲ್ಲಿ ಪ್ರಯಾಣ ಮಾಡುತ್ತಿದ್ದಾರೆ...

ಸಧ್ಯಕ್ಕೆ ಇಷ್ಟು ಸಾಕು

ಮತ್ತೇ ಸಲಾಂ ಅಲೆಕುಂ ಹರಿ ಚೇತನ್


ನನ್ ಕಡೆ ಇಂದ ಒಂದಿಷ್ಟು updates:

ನನ್ನ ದೋಸ್ತು ಹರಿಚೇತನ್ ಕೊನೆಗೂ ಅಮ್ಫಿ ಮೇಲೆ ಮಾಡುತ್ತಿದ್ದ ಸತತ ದಂಡಯಾತ್ರೆಯನ್ನು ಕೊನೆಗೊಳಿಸಿದ್ದಾನೆ. ಎಲ್ಲರು ಕಣ್ಣರಳಿಸುವಂತೆ ಅಮ್ಫಿ ಯ ಮೇಲೆ ದಿಗ್ವಿಜಯವನ್ನು ಸಾಧಿಸಿ, SBIMFಗೆ ಹೆಮ್ಮೆ ತಂದಿದ್ದಾನೆ. ಅವನಿಗೆ ನಮ್ಮ ಶುಭಾಶಯಗಳು:)

ಮೊನ್ನೆ ನನ್ನ ಇನ್ನೊಬ್ಳು ದೋಸ್ತು ಶ್ವೇತ ಪಂಡಿತ್ ತಮ್ಮ ಹುಟ್ಟು ಹಬ್ಬವನ್ನು ಅಮೆರಿಕದಲ್ಲಿ ಆಚರಿಸಿಕೊಂಡರು, ಅವಳಿಗೂ ನಮ್ಮ ಶುಭಾಶಯಗಳು.

ಸೌದಿಯಿಂದ ಸುಧಿ ಹೇಳಿದ್ದು:

ಅವನು ಕೆಲಸ ಮಾಡೋ ಕಂಪನಿಲಿ expatsಗೆ ಪಾಪದ ಕೋಣೆ (Sin Room) ಕೊಟ್ಟಿದ್ದಾರಂತೆ, ಅದೇನ್ ಪಾಪ ಮಾಡ್ತಾರೋ ಗೊತ್ತಿಲ್ಲ. ಅಲ್ಲಿ ಕೆಲಸ ಮಾಡೋ ಎಲ್ಲ non-muslims ಅದೇ ಪಾಪದ ಕೋಣೆಲಿ ಪಾಪದ ಕೆಲಸಗಳನ್ನ ಮಾಡ್ತಾರಂತೆ ( ಎಂತ ಪಾಪ ಅಂತ ಮಾತ್ರ ಕೇಳಬೇಡಿ).

ಸೆಂಟ್ರಲ್ ಮಾರ್ಕೆಟ್ ಸತ್ಯ ಹೇಳಿದ್ದಿಷ್ಟು:

ನಮ್ಮ ಸತ್ಯ ಕೆಲಸ ಮಾಡೋ ಸೆಂಟ್ರಲ್ ಮಾರ್ಕೆಟಲ್ಲಿ ಇರಾನಿಗಳು ಕೋಕಾಕೋಲನು ಕುಡಿತಾರಂತೆ, ಮದ್ಯಾಹ್ನ ಸಂಬೂಸನು (ಸಮೋಸ) ತಿಂತಾರಂತೆ. ದೇಶದಲ್ಲಿರೋ ಎರಡೇ ಎರಡು ಮದ್ಯದ ಅಂಗಡಿಗಳು ಮುಚ್ಚಿದಾರಂತೆ ಸದ್ಯಕ್ಕೆ, ದೇಶದ ಕುಡುಕರಿಗೆಲ್ಲ ಶಾನೆ ಕಷ್ಟ ಆಗ್ಬಿಟ್ಟಿದೆ.. ಪಾಪ... ಪಾಪ... ಛೆ... ಛೆ... ಕಷ್ಟ....ಕಷ್ಟ...