9/03/2008 04:45:00 ಅಪರಾಹ್ನ

ರಮದಾನ್ ಮುಬಾರಕ್

ಸಲಾಂ ಆಲೇಕುಂ, ನಮಸ್ಕಾರ,

ಮೊಟ್ಟ ಮೊದಲನೆ ಬಾರಿಗೆ ನಾನು ಅರಬರ ದೇಶದಲ್ಲಿ ರಮಾದಾನ್ ತಿಂಗಳು ಕಳಿಯುತ್ತಿದ್ದೇನೆ. ಭಾರತದಲ್ಲಿ ಇದ್ದಾಗ ಅಷ್ಟೊಂದು ಗೊತ್ತಾಗ್ತಿರಲಿಲ್ಲ ಇದರ ಬಗ್ಗೆ. ಇಲ್ಲಿಗೆ ಬಂದಮೇಲೆ ಅದರ ಬಗ್ಗೆ ಸ್ವಲ್ಪಸ್ವಲ್ಪವಾಗಿ ಗೊತ್ತಾಗ್ತಿದೆ. ಇಲ್ಲಿನ ಮುಸಲ್ಮಾನರು ಬೆಳಿಗ್ಗೆ 4 ಗಂಟೆ ಇಂದ ಸಂಜೆ 6 ಗಂಟೆ ವರೆಗೂ (ಅಂದರೆ ಸೂರ್ಯೋದಯದಿಂದ ಸೂರ್ಯಸ್ತದವರೆಗೆ) ಉಪವಾಸ ಇರ್ತಾರೆ. ಬೆಳಿಗ್ಗಿನ ಪ್ರಾರ್ಥನೆ ಮುಗಿಸಿ, ಊಟ ಮಾಡಿದರೆ ಮತ್ತೆ ತಿನ್ನೋಕೆ ಅವಕಾಶ ಇರೋದು ಸಂಜೆಯ ಪ್ರಾರ್ಥನೆ ಆದನಂತರವೇ.

ನಮ್ಮ ಕಛೇರಿಯಲ್ಲಿ, ನನ್ನೊಬ್ಬನನ್ನು ಹೊರತುಪಡಿಸಿದರೆ ಬಾಕಿ ಎಲ್ಲರು ಮುಸಲ್ಮಾನರೆ. ಅದಕ್ಕೆ ಇವಾಗ ನಮ್ಮ ಆಫೀಸಲ್ಲಿ ಬೆಳಿಗ್ಗೆ ೯ ಘಂಟೆಗೆ ಕೆಲಸ ಶುರು ಮಾಡುತ್ತಿದ್ದೇವೆ, ಮದ್ಯಾಹ್ನ ೩.೩೦ ಘಂಟೆಗೆ ಮನೆಗೆ ಹೋಗುತ್ತಿದ್ದೇವೆ. ಮೊದಲಿನಹಾಗೆ ಕೇಳಿದಾಗೆಲ್ಲ ಕಾಫಿ ಟೀ ಸಿಗಲ್ಲ. ನನಗೊಬ್ಬನಿಗೆ ನಮ್ಮ ಹುಡುಗ ಬೆಳಿಗ್ಗೆ ಕಾಫಿ ಮತ್ತೆ ನೀರನ್ನ ತಂದುಕೊಡುತ್ತಾನೆ. ಅದನ್ನ ನನ್ನ ಜಾಗದಲ್ಲೇ ಕುಳಿತು ಅಥವಾ ಆಫೀಸಿನ ಅಡುಗೆಮನೆಯಲ್ಲಿ ಕುಳಿತು ಕುಡಿಯೋ ಪರಿಸ್ಥಿತಿ ಬಂದಿದೆ. ಊಟ ಅಥವಾ ತಿಂಡಿ ಬ್ರೇಕ್ ಇರುವುದಿಲ್ಲ. ಅದಕ್ಕಾಗಿ ಬೆಳಿಗ್ಗೆನೆ ಮನೆಯಲ್ಲಿ ಊಟ ಮುಗಿಸಿ ಬರುತ್ತಿದ್ದೇನೆ. ಇಲ್ಲಿನ ಮುಸಲ್ಮಾನರು ಸಂಜೆ ಮನೆಯಲ್ಲಿ ಪ್ರಾರ್ಥನೆ ಮಾಡಿ, ಕರ್ಜೂರದ ಹಣ್ಣು ತಿಂದು ತಮ್ಮ ದಿನದ ಉಪವಾಸವನ್ನು ಕೊನೆಗೊಳಿಸುತ್ತಾರೆ. ನಂತರ ಬೆಲಿಗಿನವರೆಗೂ ಏನು ಬೇಕಾದರು ತಿನ್ನುತ್ತಲೇ ಇರುತ್ತಾರೆ.

ಸಂಜೆ 6.30 ಯಿಂದ 7.30 ವರೆಗೆ ಎಲ್ಲ ಅಂಗಡಿ, ಹೋಟೆಲ್, ಮುಚ್ಚಿರುತ್ತವೆ. ಬಹರೈನಿನ ಎಲ್ಲ ರಸ್ತೆಗಳು ಕಾಲಿ ಇರುತ್ತವೆ. ಏನೋ ಬಂದ್ ಇದೆ ಅನ್ನೋತರ ಕಾಣ್ಸತ್ತೆ ನೋಡಿದ್ರೆ, ಆದ್ರೆ 7.30 ಆದಮೇಲೆ ಮತ್ತೆ ಜನ ರಸ್ತೆಗೆ ಬರ್ತಾರೆ (ನಡ್ಕೊಂಡಲ್ಲ, ಕಾರಲ್ಲಿ). ಪುಣ್ಯಕ್ಕೆ ಇವರೆಲ್ಲ ಉಪವಾಸ ಇರೋದ್ರಿಂದ ವಾತವರಣ ಚನಾಗಿದೆ, ಮಧ್ಯಪಾನ ಧೂಮಪಾನ ನಿಷೇಧಿಸಲಾಗಿದೆ. ಅಕಸ್ಮಾತ್ ಕುಡಿಯೊವಾಗ ಸೇದೊವಾಗ ಸಿಕ್ಕಿಹಾಕಿಕೊಂಡರೆ ಏನ್ಮಾಡ್ತಾರೆ ಅಂತ ಗೊತ್ತಿಲ್ಲ :)

ಬೇಸಿಗೆ ಕಾಲ ಮುಗಿಯುತ್ತ ಬಂದಿದೆ, Humidity ಸ್ವಲ್ಪ ಕಮ್ಮಿ ಆಗಿದೆ ಇವಾಗ. ದೊಡ್ಡೋರು ಹೇಳಿರೋ ಪ್ರಕಾರ ಸಕ್ಕತ್ Humidity ಇದ್ದರೆ ಕರ್ಜೂರ ಹಣ್ಣಾಗತ್ತಂತೆ, ಇಲ್ಲದಿದ್ದರೆ ಹಾಗೆ ಒಣಗತ್ತಂತೆ. ಹಾಗಾಗಿ ಇಲ್ಲಿ Humidityನು ಒಳ್ಳೆದೇನೆ. ಸಕ್ಕತ್ ಚನಾಗಿರೋ ಕರ್ಜೂರದ ಅರೆಹಣ್ಣು, ಮತ್ತು ಕಳಿತ ಹಣ್ಣು ಸಿಗತ್ತೆ ಇವಾಗ

ರಮಾದಾನ್ ತಿಂಗಳ ಪ್ರಯುಕ್ತ ಎಲ್ಲ ಅಂಗಡಿ ಮುಂಗಟ್ಟುಗಳಲ್ಲೂ ಒಳ್ಳೆಯ ರಿಯಾಯಿತಿ ಕೊಡುತ್ತಿದ್ದರೆ, ಆದ್ರೆ ಏನ್ ತೊಗೊಳೊಕೂ ಜನರ ಹತ್ತಿರ ದುಡ್ಡಿಲ್ಲ ಅಷ್ಟೆ. ಭಾರತದಿಂದ ಬರೋ ಎಲ್ಲ ಸಾಮಾನಿನ ಬೆಲೆ ಗಗನ ಮುಟ್ಟಿದೆ

ಈ ದೇಶದಲ್ಲಿ ನಮ್ಮ ಜನ ಗಣಪತಿ ಹಬ್ಬ ಗೌರಿ ಹಬ್ಬ ಮಾಡ್ತಿದಾರೆ. ಇಂಪೋರ್ಟೆಡ್ ಗಣಪ ಸಿಗ್ತಾನೆ, ಅಲಂಕಾರಕ್ಕೆ ಭಾರತದಿಂದನೆ ಹೂವು ಬರುತ್ತೆ ( ಹಬ್ಬಕ್ಕೆ ಮೊದಲ ರೇಟ್: ಒಂದು ಮಾರಿಗೆ ಕೇವಲ ಒಂದು ದಿನಾರ್ ಅಷ್ಟೆ, ನಿನ್ನೆ ಎಷ್ಟಿತ್ತು ಅಂತ ಕೇಳಿಲ್ಲ). ನಮ್ಮ ಮನೆಯಲ್ಲಿ ಈ ವರ್ಷ ಹಬ್ಬ ಇಲ್ಲದ ಪ್ರಯುಕ್ತ ನಾವು ಯಾವುದೇ ಆಚರಣೆ ಮಾಡಲಿಲ್ಲ. ಪಾಪ ನಮ್ಮ ಲಕ್ಷ್ಮಿಗೆ ಇನ್ನೊ ಬೇಜಾರಿದೆ ಅದ್ರ ಬಗ್ಗೆ....

ನೀವೆಲ್ಲ ಹಬ್ಬ ಹೇಗೆ ಮಾಡಿದ್ರಿ ಅಂತ ಪತ್ರ ಬರದು ತಿಳಿಸಿ.

ನಮಸ್ಕಾರ ಮತ್ತೆ ಸಿಗೋಣ

ಆದಿತ್ಯ